Tuesday, September 23, 2014

ಹನಿಗವನ ನುಡಿವಮನ



ಎಲ್ಲರಿಗೂ ಮಕರ ಸಂಕ್ರಾಂತಿ
ದೇಶಪ್ರೇಮದಲ್ಲಿ " some ಕ್ರಾಂತಿ",
ಅಭಿವೃಧಿಯಲ್ಲಿ " sum ಕ್ರಾಂತಿ ",
ಆರೋಗ್ಯದಲ್ಲಿ " ಸಮಕ್ರಾಂತಿ " ಕರುಣಿಸಲಿ


ಗೆಳೆತನ

ಬಾಲ್ಯದ ಗೆಳೆತನವೇ ಗೆಳೆತನವು ಗೆಳೆಯ
ಹಮ್ಮು ಬಿಮ್ಮುಗಳ ಮೊರೆತವಿಲ್ಲದ ಸಮಯ


ಕುಡುಕ

ಕಾಡದೇ ಕುಡಿಯುವವ ಕಾನೂನಿಗೆ ಉತ್ತಮನು
ಬೇಡದೇ ಕುಡಿಯುವವ ಬಾರಿಗೆ ಬೇಕವನು
ಕಾಡೀಬೇಡಿ ಕುಡಿಯುವವ ಬೀಡಿಗೂ ಬೇಡುವನು
                ರಚನೆ : ಬಟ್ಟಿ ಇಳಿಸಿದ್ದಲ್ಲಾ ಸ್ವಂತ ಮಾಲು
ಯುಗಾದಿ

ಹೊಸದು ವರ್ಷ ಹೊಸತು ಹರ್ಷ
ನವಜಾತದ ನವಿರು ಸ್ಪರ್ಶ 


ಬರಲಿ ಎಲ್ಲರ ಬಾಳಲ್ಲಿ ಹೊಸದು ವಸಂತ
ಇರಲಿ ಎಲ್ಲರಲ್ಲು ಖುಷಿ ಅನಂತ 

ತರೆಗೆಲೆಗಳು ಉದುರಿ, ಮರಿ ಎಲೆಗಳು ಚಿಗುರಿ
ತಿರುಗಿತು  ಋತುಗಳ ಭೂಮಿ ಬಣ್ಣದ ಬುಗುರಿ
ಉದಯವಾಗಲಿ ಹೊಸ ವರ್ಷದ ಹೊಸದು ಗುರಿ
                           

ಶುಭಾಶಯ

ಕಿರು ನಗೆಯನ್ನು ಸೂಸಿ
ತೊದಲು ನುಡಿಯಲ್ಲಿ ನಲಿಸಿ
ಅಂಬೆಗಾಲಲ್ಲಿ ಮನೆಯಲ್ಲಾ ಗುಡಿಸಿ
ನಮ್ಮ ದುಖವನ್ನೆಲ್ಲ ಅಳಿಸಿದ
ನನ್ನ ಪುಟ್ಟಿಗೆ ಹತ್ತು ವರುಷ
ಇರಲಿ ನಿನ್ನ ಬಾಳಲ್ಲಿ ಹರುಷ ನೂರು ವರುಷ

     

ಕವಿತೆ

ಸರಿಸಿದ ರವಿ ಕವಿಗೆ ಕವಿದಾ ಕತ್ತಲು
ಹೊಳೆದಾಗ ಸಾಲು ಕವಿತೆಯಾಯಿತು ಬೆತ್ತಲು

 ಕವಿ


ಕನಸಿನ ಕದ ತೆರೆದು, ವಾಸ್ತವವ ಕ್ಷಣ ತೊರೆದು
ಕನಸಿಗನ ಕಣ್ಣಲ್ಲಿ ನೀ ಜಗವ ಸವಿಯೇ
ವಾಸ್ತವದಿ ನೀನೂ ಒಬ್ಬ ಸುಂದರ ಕವಿಯೇ
                        
                                           © ಮಹೇಶ್ ಕಶ್ಯಪ್

 

 






 

 

 

No comments:

Post a Comment