ಹತ್ತು ಹದಿನೈದು ವರ್ಷಗಳ ಹಿಂದೆ ಐಟಿ ಅಳವಡಿಸುವಾಗ ಜನರ ನಿರುತ್ಸಾಹ, ತಾತ್ಸಾರ
ಇದರಿಂದ ಏನು ಪ್ರಯೋಜನ ? ಐಟಿ ಓದಿದವರಿಗೆ ಮಾತ್ರ ಲಾಭ, ಇದರಿಂದ ಜನ ಸಾಮಾನ್ಯರಿಗೆ ಯಾವ ಪ್ರಯೋಜನ ? ಎಂದವರೇ ಹೆಚ್ಚು. ಇಂದು ಲಾಭಪಡೆದೂ ಸಹ
ಭಾರತ ಏನೂ ಬದಲಾಗಿಲ್ಲ ಎನ್ನುವರು ಕಡಿಮೆ ಇಲ್ಲ. ಆದರೆ ಹಲವು ದಶಕಗಳಿಂದ ಜಡತ್ವ ಕಂಡ ನಮಗೆ ಕೆಳಗಿನಕೆಲವು ಬದಲಾವಣೆ ಕಂಡಿದ್ದರೆ ಖುಷಿ ಪಡೋಣ ಹಾಗೂ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡೋಣ ಅಲ್ವಾ!
ಇದರಿಂದ ಏನು ಪ್ರಯೋಜನ ? ಐಟಿ ಓದಿದವರಿಗೆ ಮಾತ್ರ ಲಾಭ, ಇದರಿಂದ ಜನ ಸಾಮಾನ್ಯರಿಗೆ ಯಾವ ಪ್ರಯೋಜನ ? ಎಂದವರೇ ಹೆಚ್ಚು. ಇಂದು ಲಾಭಪಡೆದೂ ಸಹ
ಭಾರತ ಏನೂ ಬದಲಾಗಿಲ್ಲ ಎನ್ನುವರು ಕಡಿಮೆ ಇಲ್ಲ. ಆದರೆ ಹಲವು ದಶಕಗಳಿಂದ ಜಡತ್ವ ಕಂಡ ನಮಗೆ ಕೆಳಗಿನಕೆಲವು ಬದಲಾವಣೆ ಕಂಡಿದ್ದರೆ ಖುಷಿ ಪಡೋಣ ಹಾಗೂ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡೋಣ ಅಲ್ವಾ!
ನಮ್ಮ ಹಣ ವಾಪಸ್ಸು ಪಡೆಯಲು ಸರತಿಯಲ್ಲಿ ನಿಂತು, ಗೋಗರೆದು, ಕೈಮುಗಿದು ದಿನ ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಅಲೆಯುತ್ತಿದ್ದ ಪ್ರಸಂಗಗಳು ಕಂಡ ನಮಗೆ, ಇಂದು ಯಾರನ್ನೂ ದಮ್ಮಯ್ಯ ಅನ್ನದೆ ಕೆಲವು ಕ್ಷೇತ್ರದಲ್ಲಿ ( ಬ್ಯಾಂಕಿಂಗ್, ಪಿ ಎಫ್, ವಿಮೆ, ಸಾರಿಗೆ, ತೆರಿಗೆ ಹಾಗು ಇನ್ನೂ ಹಲವು ) ಅಂತರ್ಜಾಲ ಬಂದು ಆಮೂಲಾಗ್ರ ಬದಲಾವಣೆ ಕಂಡಿದ್ದೇವೆ.
ಹಣ ಪಾವತಿ ಮಾಡಲು ಅಂತರ್ಜಾಲ ಬಂದು ನಮ್ಮ ದಿನಚರಿಯಲ್ಲಿ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಾಗಿ ಭ್ರಷ್ಟತೆ ತಗ್ಗಿದೆ, ಯಾರಿಗೂ ಗೊಡ್ಡು ಸಲಾಮು ಹೊಡೆಯದೆ ನಮ್ಮ ಹಕ್ಕಿನ ಸೇವೆಯ ಲಾಭ ಪಡೆಯುವಂತಾಗಿದೆ.
ಬದಲಾದ ಚಿತ್ರಣವೆಂದರೆ ಅಂದು ಬ್ಯಾಂಕುಗಳಲ್ಲಿ ನಮ್ಮ ಖಾತೆಯ ಹಣ ಪಡೆಯಲು ಹಾಗೂ ಸಾಲ ಪಡೆಯಲು ಬೇಡ ಬೇಕಾಗಿತ್ತು ಇಂದು ನಮಗೆ ಬೇಡವೆಂದರೂ ಸಾಲ ಕೊಡಲು ಬ್ಯಾಂಕುಗಳು ಸಂಪರ್ಕಿಸುತ್ತವೆ. ಹಿಂದೆ ಬ್ಯಾಂಕಿನ ಯಾವುದೇ ವ್ಯವಹಾರ ಸುಸೂತ್ರವಾಗಿ
ಮುಗಿಯಲು ನಮಗೆ ಪರಿಚಯವಿದ್ದರೆ ಮಾತ್ರ ಅನ್ನುವ ಹಾಗಿತ್ತು, ಆದರೆ ಇಂದು ಎಷ್ಟು ಬದಲಾವಣೆ ಅಲ್ವಾ?
ಮುಗಿಯಲು ನಮಗೆ ಪರಿಚಯವಿದ್ದರೆ ಮಾತ್ರ ಅನ್ನುವ ಹಾಗಿತ್ತು, ಆದರೆ ಇಂದು ಎಷ್ಟು ಬದಲಾವಣೆ ಅಲ್ವಾ?
ಇನ್ನು ಸಾರಿಗೆ ಕ್ಷೇತ್ರಕ್ಕೆ ಬಂದರೆ, ಪರಸ್ಥಳಕ್ಕೆ ಹೋಗಲು ಮುಂಗಡವಾಗಿ ಟಿಕೇಟು ಪಡೆಯಲು ಆಯ ನಿಲ್ದಾಣಕ್ಕೆ ಹೋಗಿ ಸಿಂಬಂಧಿ ಇದ್ದರೆ ಹಾಗೂ ಸಾಲು ಕಡಿಮೆ ಇದ್ದರೆ ನಮ್ಮ ಪುಣ್ಯ, ಇಲ್ಲದಿದ್ದರೆ ಮಾಮೂಲಿಯಾಗಿ ಕುರಿಗಳು ತುಂಬಿದಂತೆ ನಿಂತುಕೊಳ್ಳಲೂ
ಜಾಗವಿಲ್ಲದೆ ನಿರ್ವಾಹಕನ ಸಹಪ್ರಯಾಣಿಕರ ಜೊತೆ ವಾಗ್ವಾದ ಮಾಡಿಕೊಂಡು ಊರ ನಿರೀಕ್ಷಿಸಬೇಕಾಗಿತ್ತು . ಇನ್ನು ಪ್ರಯಾಣ ರದ್ದಾದರೆ ಹಣ ವಾಪಸ್ಸು ಪಡೆಯಲು ನಾವು
ಪೂರ್ವ ಜನ್ಮಮದ ಪುಣ್ಯ ಇರಬೇಕಾಗಿತ್ತು, ಆದರೆ ಇಂದು ಎಷ್ಟು ಬದಲಾವಣೆ ಅಲ್ವಾ?
ಜಾಗವಿಲ್ಲದೆ ನಿರ್ವಾಹಕನ ಸಹಪ್ರಯಾಣಿಕರ ಜೊತೆ ವಾಗ್ವಾದ ಮಾಡಿಕೊಂಡು ಊರ ನಿರೀಕ್ಷಿಸಬೇಕಾಗಿತ್ತು . ಇನ್ನು ಪ್ರಯಾಣ ರದ್ದಾದರೆ ಹಣ ವಾಪಸ್ಸು ಪಡೆಯಲು ನಾವು
ಪೂರ್ವ ಜನ್ಮಮದ ಪುಣ್ಯ ಇರಬೇಕಾಗಿತ್ತು, ಆದರೆ ಇಂದು ಎಷ್ಟು ಬದಲಾವಣೆ ಅಲ್ವಾ?
ಹೌದು ನಾವು ಬೇರೆ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಕಾಲು ಭಾಗ ಪಯಣಿಸಿದ್ದೀವಿ, ಎಲ್ಲಾ ಸೇವೆಗಳು ಆನ್ಲೈನ್ ಆಗಿ ಇನ್ನಷ್ಟು ಪಾರದರ್ಶಕ ಹಾಗು ಭ್ರಷ್ಟರಹಿತವಾದರೆ ನಮ್ಮ ಭಾರತ ಸುಭದ್ರವಾಗುತ್ತದೆ.
ನಾನಿಲ್ಲಿ ಯಾವುದೇ ಸರ್ಕಾರದ ಪರವಾಗಿ ಮಾತಾಡುತ್ತಿಲ್ಲ ಯಾಕೆಂದರೆ ಈ ಬದಲಾವಣೆಗಳು ನಾವು ಕಂಡಿರುವುದು ತಂತ್ರಜ್ಞಾನದ ಅಳವಡಿಕೆಯ ಪ್ರಭಾವದಿಂದ, ಅದನ್ನು ಯಾವ ಸರ್ಕಾರವೇ ಮಾಡಿರಲಿ ಅವರಿಗೆ ಶ್ಲಾಘನೆ. ಈ ಯುಗದಲ್ಲಿ ಬದಲಾವಣೆಗಳನ್ನು ತರಲು ಸರ್ಕಾರಗಳು ತುದಿಗಾಲಲ್ಲಿ ನಿಲ್ಲಬೇಕು ಹಾಗೂ ಬದಲಾವಣೆಯ
ಲಾಭ ಪಡೆಯಲು ನಾವು ಸನ್ನದ್ಧರಾಗಬೇಕು, ಆಲ್ವ ಏನಂತೀರಿ ಗೆಳೆಯರೆ ?
ಲಾಭ ಪಡೆಯಲು ನಾವು ಸನ್ನದ್ಧರಾಗಬೇಕು, ಆಲ್ವ ಏನಂತೀರಿ ಗೆಳೆಯರೆ ?
No comments:
Post a Comment